Posts

Showing posts from June, 2021

ಒಂದು ಹಾವಿನ ಕಥೆ

 ಬರಹಗಾರ. ಲಕ್ಷ್ಮಣ ರಾಟಿಮನಿ                     ಒಂದು ರಾತ್ರಿಯಲ್ಲಿ (ಕಮ್ಮಾರ) ಬಡಿಗನ ಅಂಗಡಿಯಲ್ಲಿ ಒಂದು ಹಾವು ಬಂದಿತ್ತು ಅದು ಕತ್ತಲೆಯಲ್ಲಿ ಹರಿದಾಡುತ್ತ ಗರಗಸದ ಹತ್ತಿರ ಸುಳಿಯಿತು, ಗರಗಸದ ಒಂದು ಚೂಪಾದ ಹಲ್ಲು ಹಾವಿನ ಬಾಲಕ್ಕೆ ತಾಗಿತ್ತು ಸ್ವಲ್ಪ ಗಾಯವು ಆಯಿತು ತಕ್ಷಣವೇ ಅದು ತಿರುಗಿ ಗರಗಸವನ್ನು ಕಡೆಯಲು ಪ್ರಯತ್ನಿಸಿತು. ಇದರಿಂದ ಹಾವಿನ ಬಾಯಿಗೆ ಗಾಯವಾಯಿತು ಗಾಯದಿಂದ ವಿಚಲಿತವಾದ ಹಾವು ಕೋಪದಲ್ಲಿ ಏನು ನಡೆಯುತ್ತಿದೆ ಎಂದು ಸರಿಯಾಗಿ ತಿಳಿಯದೆ ಗರಗಸ ತನ್ನನ್ನು ಕಚ್ಚುತ್ತಿದೆ ಎಂದು ಭಾವಿಸಿತು. ಗಗರಗಸವನ್ನು ಉಸಿರುಗಟ್ಟಿಸಿ ಸಾಯಿಸುವ ಉದ್ದೇಶದಿಂದ ಗರಗಸವನ್ನು ಸುತ್ತಿಕೊಳ್ಳಲು ಶುರುಮಾಡಿತು ಗಾಯ ಹೆಚ್ಚಾದಂತೆ ಗರಗಸವನ್ನು ಮತ್ತಷ್ಟು ಶಕ್ತಿಮೀರಿ ಸುತ್ತಿಕೊಂಡಿತ್ತು ಆದರೆ ಮೈಯೆಲ್ಲಾ ಗಾಯವಾಗಿದ್ದು ಹಾವಿಗೆ ಹೊರತು ಗರಗಸಕ್ಕೆ ಏನು ಆಗಲಿಲ್ಲ ಅತಿಯಾದ ರಕ್ತಸ್ರಾವದಿಂದ ಹಾವು ಸತ್ತುಹೋಯಿತು. ನೀತಿ:: ಹೀಗೆ ಒಮ್ಮೊಮ್ಮೆ ನಮಗೆ ತೊಂದರೆ ಮಾಡಿದವರನ್ನು ಶಿಕ್ಷಿಸುವ ಭರದಲ್ಲಿ ನಾವು ಉದ್ವೇಗಕೊಳ್ಳುತ್ತೇವೆ. ಕೋಪದಲ್ಲಿ ಪ್ರತಿಕ್ರಿಯಿಸಿ ಅವರಿಗೆ ಹಾನಿಮಾಡಲು ಪ್ರಯತ್ನಿಸುತ್ತೇವೆ. ಆದರೆ ನಿಜವಾಗಿಯೂ ನಾವು ನಮಗೆ ಶಿಕ್ಷಿಸಿಕೊಂಡಿರುತ್ತೇವೆ ನಮಗಾಗದ ವ್ಯಕ್ತಿಗಳನ್ನು ಕೆಲ ಅಹಿತಕರ ಘಟನೆಗಳನ್ನು ನಿರ್ಲಕ್ಷಿಸುವುದು ಒಳ್ಳೆಯದು ಅಸೂಯೆ ದ್ವೇಷ ಇವಕ್ಕಿಂತ ಪ್ರೀತಿ ಸಹ...

ಪೆನ್ಸಿಲ್ ಇಂಜಕ್ಷನ್

 ಒಬ್ಬ ಬಡ ರೈತನು ತನ್ನ ತೋಟದಲ್ಲಿ ಕೆಲಸ ಮಾಡುತ್ತಿರುವಾಗ ತನ್ನ ತೋಟದ ಪಕ್ಕದಲ್ಲಿರುವ ಬಾವಿಯಿಂದ ಒಬ್ಬ ವ್ಯಕ್ತಿ ಕಾಪಾಡಿ ಕಾಪಾಡಿ ಎಂದು ಕೂಗುತ್ತಿದ್ದ ಇದನ್ನು ಗಮನಿಸಿದ ರೈತನು ಆ ವ್ಯಕ್ತಿಯನ್ನು ಬಾವಿಯಿಂದ ಮೇಲಕ್ಕೆತ್ತಿದನು. ಆ ವ್ಯಕ್ತಿಯು ಶ್ರೀಮಂತ ವ್ಯಾಪಾರಿಯಾಗಿದನು ಮರುದಿವಸ ರೈತನ ಮನೆಗೆ ಶ್ರೀಮಂತ ವ್ಯಕ್ತಿಯ ಕುದುರೆಯ ಗಾಡಿಯಲ್ಲಿ ಅಪಾರ ವಜ್ರವೈಡೂರ್ಯ ಮತ್ತು ಬಂಗಾರದ ನಾಣ್ಯಗಳನ್ನು ಬಡ ರೈತನಿಗೆ ಕೊಡಲು ಬಂದಿದ್ದನು ನೋಡಿದ ರೈತನು ಯಾವುಗಳನ್ನು ಸ್ವೀಕರಿಸಲಿಲ್ಲ. ಅದೇ ಸಮಯದಲ್ಲಿ ರೈತನ ಮಗ ಹೊರಗಿನಿಂದ ಬಂದಾಗ ಶ್ರೀಮಂತ ವ್ಯಕ್ತಿಯು ನಿಮ್ಮ ಮಗನು ಎಷ್ಟು ಓದಿದ್ದಾನೆ ಎಂದು ಕೇಳಿದನು ಆಗ ಬಡರೈತನು ಹತ್ತನೇ ತರಗತಿ ಓದಿದ್ದಾನೆ ಮುಂದೆ ಓದಿಸಲು ಸಾಧ್ಯವಾಗಲಿಲ್ಲ ಹಾಗಾಗಿ ತೋಟದಲ್ಲಿ ಕೆಲಸ ಮಾಡುತ್ತಾನೆ ಎಂದಾಗ ಶ್ರೀಮಂತ ವ್ಯಕ್ತಿಯು ನಾನು ನಿಮ್ಮ ಮಗನನ್ನು ಓದಿಸುತ್ತೇನೆ ನೀವು ಇದಕ್ಕೆ ಅನುಮತಿ ನೀಡಬೇಕೆಂದು ಕೇಳಿಕೊಂಡನು. ನಂತರ ಶ್ರೀಮಂತ ವ್ಯಕ್ತಿಯ ಮಗನು ಮತ್ತು ರೈತನ ಮಗ ಇಬ್ಬರೂ ಜೊತೆಗೂಡಿ ವಿದ್ಯಾಭ್ಯಾಸ ಆರಂಭಿಸಿದರು. ಒಂದು ದಿನ ಶ್ರೀಮಂತ ವ್ಯಕ್ತಿಯ ಮಗನಿಗೆ ಕಾಯಿಲೆ ಉಂಟಾಗಿತ್ತು ಶ್ರೀಮಂತ ವ್ಯಕ್ತಿಯು ಪ್ರಸಿದ್ಧ ವೈದ್ಯರಿಗೂ ತೋರಿಸಿದನು ಆದರೆ ಕಾಯಿಲೆ ಗುಣ ಆಗುವ ಲಕ್ಷಣ ಕಾಣಲಿಲ್ಲ ಆದರೆ ಶ್ರೀಮಂತ ವ್ಯಕ್ತಿಯು ತುಂಬಾ ಚಿಂತೆಗೆ ಒಳಗಾದನು.  ಬಡ ರೈತನ ಮಗನಾದ ಹುಡುಗ ಒಂದು ಔಷಧಿಯನ್ನು ಕಂಡುಹಿಡಿದಿದ್ದಾನೆ ಆ ಔಷಧಿಯನ್ನ...

ದಿನಕ್ಕೊಂದು ಕಥೆ

 ರಾಮಪುರ ಎಂಬ ಗ್ರಾಮದಲ್ಲಿ ಒಬ್ಬ ರೈತನಿದ್ದ ಆತನ ತೋಟದಲ್ಲಿ ಒಂದು ಸೇಬು ಮರವಿತ್ತು ಅದು ಒಂದು ಸೇಬು ಹಣ್ಣನ್ನು ಬಿಟ್ಟಿತ್ತು ಆ ರೈತನು ತುಂಬಾ ಬಡವನಾಗಿದ್ದನು.  ರೈತನು ಸೇಬು ಹಣ್ಣನ್ನು ಕೊಯ್ದು ಇದನ್ನು ಯಾರಾದರೂ ಪ್ರೀತಿಪಾತ್ರರಿಗೆ ಕೊಡಬೇಕೆಂದು ಯೋಚಿಸಿದನು ಅನಂತರ ಪ್ರಜೆಗಳನ್ನು ಕಾಪಾಡಲು ಹಗಲಿರುಳು ಶ್ರಮಿಸುವ ರಾಜನಿಗೆ ಕೊಡಲು ತೀರ್ಮಾನಿಸಿದನು. ರಾಜನ ಅರಮನೆಗೆ ಪ್ರವೇಶಿಸಿ ಇದೊಂದು ವಿಶಿಷ್ಟ ಹಣ್ಣು ಎಂದು ಹೇಳಿದನು ಆಗ ರಾಜನು ಹಣ್ಣನ್ನು ತೆಗೆದುಕೊಂಡು ನೋಡಿದಾಗ ಅವನಿಗೆ ವಿಶಿಷ್ಟ ಅನಿಸಲಿಲ್ಲ ಆದರೆ ಬಡವನಾಗಿದ್ದ   ರೈತನ ಮುಗ್ಧತೆಯನ್ನು ನೋಡಿ ಅವನಿಗೆ ಒಂದು ಕುದುರೆ ಮತ್ತು ಒಂದು ಚೀಲ ಬಂಗಾರದ ನಾಣ್ಯಗಳನ್ನು ಕೊಟ್ಟನು.  ರೈತನು ಕುದುರೆ ಮತ್ತು ನಾಣ್ಯಗಳನ್ನು ತೆಗೆದುಕೊಂಡು ಮನೆಗೆ ಬಂದನು ಆದರೆ ಅವನ ಮನೆಯ ಪಕ್ಕದಲ್ಲಿದ್ದ  ಶ್ರೀಮಂತನೊಬ್ಬನು ರೈತನನ್ನು ಕೇಳಿದನು ಕುದುರೆ ಮತ್ತು ಬಂಗಾರದ ನಾಣ್ಯಗಳು ನಿನಗೆ ಹೇಗೆ ಬಂದವು ಎಂದು ಕೇಳಿದಾಗ ರೈತನು ನಡೆದ ವಿಷಯವನ್ನು ತಿಳಿಸಿದನು. ಆಗ ಶ್ರೀಮಂತನು ತನ್ನ ಹೊಲದಲ್ಲಿದ್ದ ಬಗೆಬಗೆಯ ಸೇಬು ಹಣ್ಣುಗಳನ್ನು ಕೊಯ್ದು ಒಂದು ಗಾಡಿಯಲ್ಲಿ ತುಂಬಿಕೊಂಡು ರಾಜನ ಅರಮನೆಗೆ ಹೋದನು ರಾಜನಿಗೆ ಹಣ್ಣುಗಳನ್ನು ಕೊಟ್ಟುನು ಆಗ ರಾಜನು ತುಂಬಾ ಸಂತೋಷ ವಾದನು. ರಾಜನು ನಿನಗೇನು ಬೇಕು ಕೇಳು ಎಂದು ಹೇಳಿದಾಗ ಶ್ರೀಮಂತನು ನನಗೇನು ಬೇಡ ಎಂದು ನಾಟಕವಾಡಿದ ಆಗ ರಾಜನು  ಪ್ರತಿ...