ಚಿನ್ನದ ಸೇಬಿನ ಮರ ಭಾಗ-೧

 ಒಂದಾನೊಂದು ಕಾಲದಲ್ಲಿ ಕುಂತಲಾಪುರ ಎಂಬ ವಿಶಾಲವಾದ ಹಳ್ಳಿ ಆ ಒಂದು ಹಳ್ಳಿಯನ್ನು ರಾಜ ಜಯಚಂದ್ರ ಆಳುತ್ತಿದ್ದನು ಆತನ ತೋಟದಲ್ಲಿ ಚಿನ್ನದ ಸೇಬಿನ ಮರವಿತ್ತು ಆದರೆ ಆ ಸೇಬಿನ ಮರದ ಕಾವಲಿಗಾಗಿ ಸೈನಿಕರನ್ನು ನೇಮಕ ಮಾಡಿದ್ದನು ಮತ್ತು ಬೆಳಗ್ಗೆಯಾಗುವ ಹೊತ್ತಿಗೆ ಚಿನ್ನದ ಸೇಬಿನ ಮರದಲ್ಲಿ ಒಂದು ಹಣ್ಣು ಕಡಿಮೆಯಾಗುತ್ತಿತ್ತು ಇದನ್ನು ಗಮನಿಸಿದ ರಾಜ ಸೇಬನ್ನು ಕದಿಯುತ್ತಿರುವವರು ಯಾರೆಂದು ಚಿಂತಿಸತೊಡಗಿದನು .

ಇದನ್ನು ಗಮನಿಸಿದ ಮಂತ್ರಿ ರಾಜನ ಆದೇಶ ಪಡೆದು ತನ್ನ ಮಕ್ಕಳನ್ನು ರಾತ್ರಿ ಸೇಬಿನ ಮರದ ಕಾವಲಿಗಾಗಿ ಬಿಟ್ಟನು (...3...ಜನ )

*ಮೊದಲನೇ ದಿನ :ಮಂತ್ರಿಯ ಮೊದಲನೇ ಮಗನು ಉದಯನು ಅಂದು ರಾತ್ರಿ ಕಾವಲು ಕಾಯತೊಡಗಿದನು. ಆದರೆ ಆತನು ಅಲ್ಪ ಕಾಲದಲ್ಲಿ ನಿದ್ದೆಗೆ  ಜಾರಿದ ಬೆಳಿಗ್ಗೆ ಸೇಬಿನ ಮರದಲ್ಲಿ ಒಂದು ಹಣ್ಣು ಕಾಣೆಯಾಗಿತ್ತು.  

*ಎರಡನೆಯ ದಿನ: ಮರುದಿನ ಮಂತ್ರಿಯ ಎರಡನೆಯ ಮಗನಾದ ಶಿವನನ್ನು ನೇಮಕ ಮಾಡಿದ್ದನು ಅವನು ಕೂಡ ರಾತ್ರಿ ಸಮಯದಲ್ಲಿ ನಿದ್ದೆಗೆ ಜಾರಿದ ಸೇಬಿನ ಮರದಲ್ಲಿ ಒಂದು ಹಣ್ಣು ಕಾಣೆಯಾಗಿತ್ತು.

 *ಮೂರನೇ ದಿನ: ಮಂತ್ರಿ ತನ್ನ ಮೂರನೇ ಮಗನಾದ ಬುದ್ಧಿಯುಳ್ಳ ಅತ್ಯಂತ ಚುರುಕಾದ ಭೀಮನನ್ನು ರಾತ್ರಿ ಸೇಬುವಿನ ಮರದ ಕಾವಲಿಗೆ ಬಿಟ್ಟನು ಮಧ್ಯರಾತ್ರಿಯ ಸಮಯದಲ್ಲಿ ಉತ್ತರ ದಿಕ್ಕಿನಿಂದ ಬಂದ ಒಂದು ಚಿನ್ನದ ಹಕ್ಕಿಯು ಸೇಬನು ಕೊಂಡೊಯ್ಯುತ್ತಿತ್ತು ಇದನ್ನು ಗಮನಿಸಿದ ಭೀಮನು ಅದಕ್ಕೆ ಬಾಣವನ್ನು ಹೊಡೆದನು ಹಕ್ಕಿಯ ಒಂದು ಗರೆ ಕೆಳಗೆ ಬಿತ್ತು ಮರುದಿನ ಭೀಮನು ರಾಜನಿಗೆ ಹಕ್ಕಿಯ ಒಂದು ಗರೆಯನ್ನು ತೋರಿಸಿದನು.

                ಮುಂದುವರೆಯುವುದು


Comments